ಮಂಜೇಶ್ವರ: ಖ್ಯಾತ ಭಕ್ತಿಗೀತೆ ರಚನೆಗಾರ,ಸಾಹಿತಿ ಜನಾರ್ಧನ ಆಚಾರ್ ಮಂಜೇಶ್ವರ ರಚಿಸಿ ನಿರ್ಮಿಸಿದ ಮಧೂರುದ ಮಹಿಮೆ ಎಂಬ ವಿಡಿಯೋ ಹಾಡು ಚತುರ್ಥಿಗೆ ಮುಂಚಿತವಾಗಿ ಹೊಸಂಗಡಿ ಶ್ರೀಅಯ್ಯಪ್ಪ ಕ್ಷೇತ್ರದಲಿ ಬಿಡುಗಡೆಗೊಂಡಿತು. ಕ್ಷೇತ್ರದ ಅರ್ಚಕರಾದ ತಿರುಮಲೇಶ್ ಆಚಾರ್ ಬಿಡುಗಡೆಗೊಳಿಸಿದರು.
ಈ ಲಿಂಕ್ ಓಪನ್ ಮಾಡಿ ವಿಡಿಯೋ ವೀಕ್ಷಿಸಿ
ಸಾಮಾಜಿಕ ಮುಂದಾಳು ಅವಿನಾಶ್ ಹೆಗಡೆ, ಸಾಹಿತಿ ಜನಾರ್ದನ ಆಚಾರ್ ಹಾಗೂ ಗಾಯಕ ದರ್ಶಕ್ ಭಾಸ್ಕರ್ ಉಪಸ್ಥಿತರಿದ್ದರು. ಮಂಜೇಶ್ವರ ಅಸುಪಾಸಿನ ಹಲವು ಕ್ಷೇತ್ರಗಳ ಭಕ್ತಿಗೀತೆಗಳನ್ನು ಜನಾರ್ಧನ ಆಚಾರ್ಯ ರಚಿಸಿ ಪ್ರಸರಪಡಿಸಿದ್ದಾರೆ.
ಈ ಲಿಂಕ್ ಓಪನ್ ಮಾಡಿ ವಿಡಿಯೋ ವೀಕ್ಷಿಸಿ
ಎಸ್.ಆರ್.ಜನಾರ್ಧನ ಆಚಾರ್ಯ ಸಾಹಿತ್ಯ ರಚಿಸಿ ರಾಗ ಸಂಯೋಜನೆಗೈದ ಹಾಡನ್ನು ಯುವ ಗಾಯಕ ದರ್ಶಕ್ ಭಾಸ್ಕರ್ ಹಾಡಿದ್ದಾರೆ. ವಿರೇಂದ್ರ ಸುವರ್ಣ ಅವರ ಸುಂದರ ಛಾಯಾಗ್ರಹಣದಲ್ಲಿ ಮೂಡಿ ಬಂದಿರುವ ತುಳು ಭಕ್ತಿಗೀತೆಗೆ ಗುರು ಬಾಯಾರ್ ಸಂಗೀತ ಸಂಯೋಜನೆಗೈದಿದ್ದಾರೆ.



0 Comments