ಹೆಮ್ಮೆಯ ಯುಎಇ ಕನ್ನಡಿಗರು ಹಾಗೂ ದುಬೈ ಕನ್ನಡ ಸಂಘದಿಂದ ಉದ್ಯೋಗ ಸಂಪರ್ಕ ಮೇಳ

 


ದುಬೈ: ಉದ್ಯೋಗ ಅರಸಿ  ಕರ್ನಾಟಕದಿಂದ ಯುಎಇ ದೇಶಕ್ಕೆ  ಆಗಮಿಸಿದ ಕನ್ನಡಿಗ ಉದ್ಯೋಗಾರ್ಥಿಗಳಿಗಾಗಿ ಹೆಮ್ಮೆಯ ಯುಎಇ ಕನ್ನಡಿಗರು ದುಬೈ ಕನ್ನಡ ಸಂಘ ಜಾಬ್ ಸೀಕರ್ ಅಸ್ಸಿಸ್ಟಿಂಗ್ ವಿಂಗ್ ಮತ್ತು ದುಬೈ ಕೊಡಗು ಹಳೆ ವಿದ್ಯಾರ್ಥಿಗಳ ಸಂಘ ಜಂಟಿಯಾಗಿ ಉದ್ಯೋಗ ಸಂದರ್ಶನ ಕಾರ್ಯಾಗಾರ ಮತ್ತು ಉದ್ಯೋಗ ಸಂಪರ್ಕ ಮೇಳವನ್ನು  ಅಲ್ ಕಿ ಸೈಸ್  ಫಾರ್ಚ್ಯೂನ್ ಪ್ಲಾಜಾ ಹೋಟೆಲ್ ಸಭಾಂಗಣದಲ್ಲಿ ಅಯೋಜಿಸಿದ್ದರು . ಈ ಕಾರ್ಯಾಗಾರಕ್ಕೆ ಇನ್ನೂರಕ್ಕೂ ಹೆಚ್ಚು  ಕನ್ನಡಿಗ ಉದ್ಯೋಗಾರ್ಥಿಗಳು ಆಗಮಿಸಿದ್ದರು. ಹೆಮ್ಮೆಯ ಕನ್ನಡಿಗರು ಸಂಸ್ಥೆಯ ಮಾಜಿ ಅಧ್ಯಕ್ಷರಾದ ಶ್ರೀಮತಿ ಮಮತಾ ಮೈಸೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ತಂಡದ ಸಮಿತಿ ಸದಸ್ಯರಾದ ವಿಷ್ಣುಮೂರ್ತಿ ಮೈಸೂರು ಅವರು ನಿರೂಪಕರಾಗಿ ಕಾರ್ಯ ನಿರ್ವಹಿಸಿ  ರಫೀಕಲಿ ಕೊಡಗು ಅವರು ಮುನ್ನೆಡಿಸಿದರು. ಸೆಂತಿಲ್ ಬೆಂಗಳೂರು, ಮಮತಾ ಶಾರ್ಜಾ, ಹಾದಿಯ ಮಂಡ್ಯ ಅವರು ಉತ್ತಮ  ಸಹಕಾರ ನೀಡಿದರು . 


ಉದ್ಯೋಗ ಸಂದರ್ಶನ ಕೌಶಲ್ಯ ಕಾರ್ಯಾಗಾರದಲ್ಲಿ ಸಾಧಕ ವೃತ್ತಿಪರರಾದ  ಮಾಸ್ಟರ್ ಉಮರ್ ಫಾರೂಕ್, ಕುಮಾರಿ.ರಾಜೇಶ್ವರಿ , ಶ್ರೀ.ಸಯ್ಯದ್ ಮೊಹಮ್ಮದ್ ಅಬ್ಬಾಸ್ ,  ಶ್ರೀ. ಅವಿಲ್ ಪಿಂಟೋ  ಉದ್ಯೋಗ ಹುಡುಕಾಟದ ಎಲ್ಲ ವಿವರಗಳನ್ನು,ಸಿವಿ, ರೆಸುಮೆ ತಯಾರು ಮಾಡುವುದು , ಉದ್ಯೋಗ  ಮಾರ್ಗಗಳನ್ನು, ಸೂಕ್ಷ್ಮ ವಿಷಯಗಳನ್ನು , ಮಾನಸಿಕ ತಯಾರಿಗಳು , ಬೇಕು ಬೇಡಗಳು , ಕೌಶಲ್ಯ ಅಭಿವೃದ್ಧಿ ಸೂತ್ರಗಳನ್ನು  ತಿಳಿಸಿಕೊಟ್ಟರು.  ,  ಉದ್ಯೋಗ ಸಂಪರ್ಕ ಕಾರ್ಯಾಗಾರದಲ್ಲಿ ಕನ್ನಡಿಗರು ಮತ್ತು ಕನ್ನಡೇತರ ವ್ಯಾಪಾರಸ್ಥರು ,ಉದ್ಯೋಗಪತಿಗಳು ,  ಕಂಪನಿಗಳ  ಮಾನವ ಸಂಪನ್ಮೂಲ ವ್ಯವಸ್ಥಾಪಕರು  ಭಾಗವಹಿಸಿ ತಮ್ಮಲ್ಲಿದ್ದ ಉದ್ಯೋಗಗಳನ್ನು ಹಂಚಿಕೊಂಡರು .ಉದ್ಯೋಗಾರ್ಥಿಗಳಿಗೆ ಧೈರ್ಯ ತುಂಬಿದರು . ಇದರ ಉತ್ತಮ ಪರಿಣಾಮವಾಗಿ ಈಗಾಗಲೇ ಉದ್ಯೋಗಾರ್ಥಿಗಳ ಸಂದರ್ಶನ ನಡೆಸಿ   ಹಲವರಿಗೆ ಕೆಲಸ ಸಹ ನೀಡಿದ್ದಾರೆ. ಈ ಕಾರ್ಯಕ್ರಮ ವೀಕ್ಷಿಸಿದ ಹಲವು ಉದ್ಯೋಗದಾತರು ಇದನ್ನು ಪ್ರೋತಾಹಿಸಲು ಮುಂದೆ ಬರುತಿದ್ದಾರೆ. 


ಹೀಗೆ ಉದ್ಯೋಗ ಅರಸಿ ಬರುವ ಕನ್ನಡಿಗರಿಗೆ ಹೆಮ್ಮೆಯ ಯುಎಇ ಕನ್ನಡಿಗರು ತಂಡ ಯಶಸ್ವಿ ಸಂಪರ್ಕ ಸೇತುವೆಯಾಗಿ ಕನ್ನಡ ಸೇವೆ ಮಾಡುತ್ತಿದೆ .

Post a Comment

0 Comments