ವಾಟ್ಸಫ್ ಗ್ರೂಫಲ್ಲಿ ಒಗ್ಗೂಡಿ ಹಳೆ ವಿದ್ಯಾರ್ಥಿ ಸಂಗಮ ನಡೆಸಿದ ಮಾದರಿಯಾದ ಪೆರ್ಲ ಶಾಲಾ ಹಳೆ ವಿದ್ಯಾರ್ಥಿಗಳು



ಪೆರ್ಲ: ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆಯಲ್ಲಿ ಶಿಕ್ಷಣಗೈದು ಬಳಿಕ ತಮ್ಮ ತಮ್ಮ ಔದ್ಯೋಗಿಕ ಕಾರ್ಯಗಳಿಂದ ದೂರವಾಗಿದ್ದ ಸಮಾನ ಮನಸ್ಕರೆಲ್ಲಾ ವಾಟ್ಸಫ್ ಎಂಬ ಸಾಮಾಜಿಕ ಜಾಲತಾಣದ ಮೂಲಕ ಒಗ್ಗೂಡಿ  ತಾವು ಕಲಿತ ಶಾಲೆಗೆ ಬಂದು ಹಳೆ ವಿದ್ಯಾರ್ಥಿ ಸಂಗಮ ಏರ್ಪಡಿಸುವ ಮೂಲಕ ಮಾದರಿಯಾಗಿದ್ದಾರೆ. ಈ ಬಗ್ಗೆ ನಡೆದ ಎಸ್ಸೆಸ್ಸೆಲ್ಸಿ ಬ್ಯಾಚ್ ವಿದ್ಯಾರ್ಥಿಗಳ ಸಂಗಮ ಕಾರ್ಯಕ್ರಮ ಶಾಲೆಯಲ್ಲಿ ನಡೆಯಿತು.ಮುಖ್ಯ ಶಿಕ್ಷಕ ರಾಜೇಂದ್ರ ಬಿ.ಅವರಿಗೆ ಕಿರು ಕಾಣಿಕೆ ನೀಡಿ, ಪಾಠ ಕಲಿಸಿದ ಶಿಕ್ಷಕರು, 2015ರಲ್ಲಿ ಈ ಬ್ಯಾಚ್ ನ ವಾಟ್ಸಪ್ ಗ್ರೂಪ್ ಆರಂಭಿಸಿದ ವ್ಯಕ್ತಿ, ಅಗಲಿದ ಸಹಪಾಠಿ ಮಿತ್ರರನ್ನು ಸ್ಮರಿಸಲಾಯಿತು.




ಬಳಗದ ಉದ್ದೇಶಗಳು...

ಪ್ರತಿ ವರ್ಷ ಕಾರ್ಯಕ್ರಮ ಆಯೋಜನೆ, ಈ ಬಗ್ಗೆ ಮೂರು ತಿಂಗಳ ಮೊದಲು ನಿರ್ಧರಿಸುವುದು, ಪದಾಧಿಕಾರಿಗಳಿಲ್ಲದ ಸಹಪಾಠಿ ಸಂಘಟನೆಯ ಎಲ್ಲರಿಗೂ ಜವಾಬ್ದಾರಿ ವಹಿಸುವುದು, ಗೂಪ್ ನಲ್ಲೊ ಯಾವುದೇ ರೀತಿಯ ಹಣ ಸಂಗ್ರಹ ಮಾಡದಿರುವುದು, ಶಾಲೆಗೆ ಅಥವಾ ಇನ್ನಿತರ ಸಂಘ ಸಂಸ್ಥೆಗಳಿಗೆ ಯಾವುದೇ ದೇಣಿಗೆ ನೀಡುವುದಾದಲ್ಲಿ ವೈಯುಕ್ತಿಕವಾಗಿ ನೀಡುವುದು, ಹಾಗೂ ಈ ರೀತಿ ನೀಡುವಾಗ ಕಲಿತ ಇಸವಿಯನ್ನು ನೆನಪಿಸಿಕೊಳ್ಳುವುದು‌.ಗ್ರೂಪ್ ನಲ್ಲಿ ಸಕ್ರಿಯರಾಗುವುದು, ಮನೆಗಳಲ್ಲಿ ಯಾವುದೇ ಸಭೆ ಸಮಾರಂಭಗಳಿದ್ದರೆ ಸಹಪಾಠಿಗಳನ್ನು ಆಮಂತ್ರಿಸುವುದು, ಅನಿವಾರ್ಯ ಸಂದರ್ಭದಲ್ಲಿ ಪರಸ್ಪರ ಸಹಾಯ, ಗ್ರೂಪ್ ನಲ್ಲಿ ಸೇರಿಸಲು ಬಾಕಿ ಇರುವ ಸದಸ್ಯರನ್ನು ಸೇರಿಸುವುದು ಮೊದಲಾದ ನಿರ್ಣಯಗಳನ್ನು ಈ ಸಂದರ್ಭದಲ್ಲಿ  ಅಂಗೀಕರಿಸಿ ಶಾಲೆಯ ಸವಿ ನೆನಪುಗಳನ್ನು ಅವಿಸ್ಮರಣೀಯವಾಗಿರಿಸಲು ಪ್ರಯತ್ನಶೀಲರಾಗಿದ್ದಾರೆ.



Post a Comment

0 Comments