ಸರ್ವಧರ್ಮ ಸ್ನೇಹಕೂಟ ಏರ್ಪಡಿಸಿದ ಹೆಮ್ಮೆಯ ದುಬೈ ಕನ್ನಡ ಸಂಘ

 


ಶಾರ್ಜಾ : ಕ್ರಿಸ್ಮಸ್ ಹಬ್ಬ ಮತ್ತು ಸಂಕ್ರಾಂತಿ ಹಬ್ಬದ ಪ್ರಯುಕ್ತ ಹೆಮ್ಮೆಯ ದುಬೈ ಕನ್ನಡ ಸಂಘದವರು 3ಬಸ್ಸುಗಳಲ್ಲಿ ಸಂಯುಕ್ತ ಅರಬ್ ಸಂಸ್ಥಾನದಲ್ಲಿರುವ ಅನಿವಾಸಿ ಕನ್ನಡಿಗರನ್ನು ಹತ್ತಾ ಮತ್ತು ಫುಜೆರಾ ಕಡೆಗೆ ಬಸ್ ಪ್ರವಾಸಕ್ಕೆ ಕರೆದುಕೊಂಡು ಹೋಗಿ ಹತ್ತಾ ಬಳಿ ಇರುವ ವಾದಿ ಉದ್ಯಾನವನದಲ್ಲಿ ಸಂಕ್ರಾಂತಿ ಕ್ರಿಸ್ಮಸ್ ಸ್ನೇಹ ಕೂಟವನ್ನು ಆಚರಿಸಿದರು,


ಬೆಳಿಗ್ಗೆ 9ರಿಂದ ಅಜ್ಮಾನ್, ಉಮ್ಮುಲ್ ಕ್ವೀನ್, ದುಬೈ, ಅಬುಧಾಬಿ ಮತ್ತು  ಶಾರ್ಜಾ ಕಡೆಯಿಂದ ನೂರಾರು ಕನ್ನಡಿಗರು ಬಸ್ ಪ್ರವಾಸಕ್ಕೆ ಕುಟುಂಬ ಸಮೇತ ಬಂದು ಪ್ರವಾಸ ಕೈಗೊಂಡು ಸಂತಸಪಟ್ಟರು, ಸ್ನೇಹಕೂಟದ ವೇಳೆ ಮಕ್ಕಳಿಗೆ ಮತ್ತು ದಂಪತಿಗಳಿಗೆ ಹಲವು ರೀತಿಯ ಪಾರ್ಕ್ ಆಟೋಟಗಳು ನಡೆದಿದ್ದು ವಿಜೇತರಿಗೆ ಸ್ನೇಹ ಬಹುಮಾನ ವಿತರಿಸಲಾಯಿತು ಹಾಗೂ ಈ ಸ್ನೇಹಕೂಟದಲ್ಲಿ ಪಾರ್ಕಿನಲ್ಲಿ ಆಗಮಿಸಿದ ಎಲ್ಲರೊಂದಿಗೆ  ಸತ್ಯಪ್ರಕಾಶ್ ಅವರ ಮಗಳು ನಿಧಿ ಬೆಂಗಳೂರು  ಮತ್ತು ಅಸ್ಲಮ್ ಮಗ ನೂಹ್ ಐಮನ್ ಕೊಡಗು ಅವರು ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡರು.


ಪ್ರವಾಸ ಮುಗಿಸಿ ರಾತ್ರಿ ಗಂಟೆಗೆ ಎಲ್ಲರೂ ಹಿಂದುರಿಗಿದರು, ಬಸ್ ಪ್ರವಾಸ ಮತ್ತು ಸ್ನೇಹ ಕೂಟವನ್ನು ಹೆಮ್ಮೆಯ ಯುಎಇ ಕನ್ನಡಿಗರು ತಂಡದ ಮಾಜಿ ಅಧ್ಯಕ್ಷರಾದ ಶ್ರೀಮತಿ ಮಮತಾ ಮೈಸೂರು, ಮುಖ್ಯ ಸಂಚಾಲಕರಾದ ರಫೀಕಲಿ ಕೊಡಗು ಮತ್ತು ಸಮಿತಿ ಸದಸ್ಯರುಗಳಾದ ಅಕ್ರಮ್ ಕೊಡಗು  ಹಾಗೂ ಮೊಹೀನುದ್ದೀನ್ ಹುಬ್ಬಳ್ಳಿ ಅವರು ಮುನ್ನಡೆಸಿದರು.




ಜಾಹೀರಾತು




Post a Comment

0 Comments