ದೈಗೋಳಿಯ ಬೇಕರಿ ಕಾರ್ಮಿಕ ನಾಪತ್ತೆ


ಮಂಜೇಶ್ವರ : ಮೊರತ್ತಣೆ ನಿವಾಸಿ ದಿ.ಬಾಬು ಬೆಳ್ಚಪ್ಪಾಡರ ಪುತ್ರ ರೋಹಿತಾಕ್ಷ ಕೆಲಸಕ್ಕೆಂದು ತೆರಳಿದವರು ನಾಪತ್ತೆಯಾಗಿರುವುದಾಗಿ ತಿಳಿದು ಬಂದಿದೆ. ಇಲ್ಲಿಗೆ ಸಮೀಪದ ದೈಗೋಳಿಯಲ್ಲಿ ಬೇಕರಿಯೊಂದರಲ್ಲಿ ಕಾರ್ಮಿಕರಾಗಿ ದುಡಿಯುತ್ತಿದ್ದ ಇವರು ಏ.4ರಂದು ಕೆಲಸಕ್ಕೆಂದು ತೆರಳಿದ್ದು ಅಲ್ಲಿಗೆ ಹಾಜರಾಗದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಇವರ ಸಹೋದರ ಗಂಗು ಮೊರತ್ತಣೆ ಮಂಜೇಶ್ವರ ಪೋಲಿಸ್ ಠಾಣೆಗೆ ದೂರು ನೀಡಿದ್ದು ಪೋಲಿಸರು ಮೊಬೈಲ್ ಟವರ್ ಜಾಡು ಹಿಡಿದು ಪರಿಶೋಧಿಸಿದಾಗ ಮಂಜೇಶ್ವರ ಭಾಗದಲ್ಲಿ ಇವರ ಮೊಬೈಲ್ ಆಫ್ ಆಗಿರುವುದಾಗಿ ಸೂಚಿಸುತ್ತಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಯಾರದರೂ ಕಂಡವರಿದ್ದಲ್ಲಿ ಕೂಡಲೇ ಮಂಜೇಶ್ವರ ಪೋಲಿಸ್ ಠಾಣೆಗೆ ಅಥವ ಈ 9074266567, 8848073431,8907522666 ನಂಬ್ರಕ್ಕೆ ತಿಳಿಸಲು ಕೋರಲಾಗಿದೆ.

Post a Comment

0 Comments