ಕೇರಳ ಶಾಲಾ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಚಿನ್ನದ ಪದಕ ವಿಜೇತ ಶೇಣಿ ಶಾಲಾ ವಿದ್ಯಾರ್ಥಿಗೆ ಅಭಿನಂದನೆ


ಪೆರ್ಲ : ಕೇರಳ ಶಾಲಾ ಕ್ರೀಡೋತ್ಸವದಂಗವಾಗಿ ನಡೆದ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದ ಛಾಂಪಿಯನ್ ಶೀಫ್ ನಲ್ಲಿ  ಚಿನ್ನದ ಪದಕ ಪಡೆದ ಶೇಣಿ ಶ್ರೀಶಾರದಾಂಬ ಪ್ರೌಢ ಶಾಲಾ ವಿದ್ಯಾರ್ಥಿ ಕೌಶಿಕ್ ಎಚ್.ಎಸ್. ನನ್ನು ಶೇಣಿ ವಿದ್ಯಾ ಸಂಸ್ಥೆಗಳ ವತಿಯಿಂದ ಅಭಿನಂದಿಸಲಾಯಿತು. ಶಾಲಾ ಪ್ರಬಂಧಕ , ಎಣ್ಮಕಜೆ ಗ್ರಾಮ ಪಂಚಾಯತು ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಅಭಿನಂದಿಸಿದರು. 


ಶಾಲಾ ಮುಖ್ಯೋಪಾಧ್ಯಾಯ ಶ್ರೀಶ ಕುಮಾರ್ , ಹೈಯರ್ ಸೆಕೆಂಡರಿ ವಿಭಾಗದ ಉಪನ್ಯಾಸಕ ಶಾಸ್ತಾ ಕುಮಾರ್,ಪ್ರೌಢ ಶಾಲಾ ವಿಭಾಗದ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ವಿಲ್ಸನ್ ಡಿಸೋಜ,ಶಾಲಾ ದೈಹಿಕ ಶಿಕ್ಷಕ ಸೃಜನ್ ರೈ, ಕಬ್ಬಡಿ ತರಬೇತುದಾರ  ವಂದಿತ್ ರೈ ಬಂಬ್ರಾಣ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.ಶಿಕ್ಷಕಿ ದಿವ್ಯಾ ಆಳ್ವ ಕಾರ್ಯಕ್ರಮ ನಿರೂಪಿಸಿದರು.

Post a Comment

0 Comments