ಕಾಯರ್ ಕಟ್ಟೆ ಶಾಲೆಯಲ್ಲಿ ಅಣಕು ಪಾರ್ಲಿಮೆಂಟ್ ಅಧಿವೇಶನ


 ಪೈವಳಿಕೆ: ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸುವ ಅಣಕು ಪಾರ್ಲಿಮೆಂಟ್ ಅಧಿವೇಶನ ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಕಾಯರ್ ಕಟ್ಟೆ ಪೈವಳಿಕೆ ಶಾಲೆಯಲ್ಲಿ ನಡೆಯಿತು. ಮಾದಕ ವ್ಯಸನದಿಂದ ಉಂಟಾಗುವ ಸಾಮಾಜಿಕ,ಆರ್ಥಿಕ, ಕೌಟುಂಬಿಕ,ಆರೋಗ್ಯ ದುಷ್ಪರಿಣಾಮಗಳ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು.ಮಾದಕ ವಸ್ತುಗಳ ಉಪಯೋಗದ ಹಾಗೂ ಅದರಿಂದುಂಟಾಗುವ ದುಷೃತ್ಯದ ವಿರುದ್ಧ ಮಸೂದೆ ಮಂಡಿಸಿ ಅಂಗೀಕರಿಸಲಾಯಿತು. ಪ್ರಧಾನ ಮಂತ್ರಿ, ಸಚಿವರು, ಪ್ರತಿಪಕ್ಷ ನಾಯಕ, ಸಭಾಧ್ಯಕ್ಷ ಜವಾಬ್ದಾರಿಯನ್ನು ಮಕ್ಕಳು ಅತ್ಯುತ್ತಮವಾಗಿ ನಿಭಾಯಿಸಿದರು. ಪ್ರಭಾರ ಮುಖ್ಯೋಪಾಧ್ಯಾಯರಾದ ಹರೀಶ್ ಕುಮಾರ್ ಬಿ, ಅಧ್ಯಾಪಕರು ಮಕ್ಕಳಿಗೆ ಮಾರ್ಗದರ್ಶನವನ್ನು ನೀಡಿದರು

Post a Comment

0 Comments