ನೆಲ್ಲಿಕುಂಜೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀನಾರಾಯಣ ಗುರುಗಳ 170ನೇ ಜನ್ಮ ದಿನಾಚರಣೆ


 ಕಾಸರಗೋಡು : ನೆಲ್ಲಿಕುಂಜೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀನಾರಾಯಣ ಗುರುಗಳ 170ನೇ ಜನ್ಮ ದಿನವನ್ನು ಆಚರಿಸಲಾಯಿತು. ಕ್ಷೇತ್ರದ ಮುಖ್ಯ ಅರ್ಚಕರಾದ ಅನೀಶ್ ಕುಮಾರ್ ಅವರ ಕಾರ್ಮಿಕತ್ವದಲ್ಲಿ ಗುರುಪೂಜೆ ನಡೆಯಿತು. ಬಳಿಕ ಸಮಿತಿಯ ಅಧ್ಯಕ್ಷ ಎನ್.ಸತೀಶ್  ಧ್ವಜಾರೋಹಣ ನಡೆಸಿದರು.  ಕ್ಷೇತ್ರದ ರಕ್ಷಾಧಿಕಾರಿ ಕೆ.ಎನ್.ವೆಂಕಟ್ರಮಣ ಹೊಳ್ಳ ಕಾಸರಗೋಡು,ಪ್ರ.ಕಾರ್ಯದರ್ಶಿ ಮಹೇಶ್ ಕುಮಾರ್, ಕೆ.ಪಿ.ರಮೇಶ್ ಬಾಬು, ನಿರ್ಮಲ ಉಪೇಂದ್ರ,ಮಂಜುನಾಥ, ಗಣೇಶ್ ಪಾರೆಕಟ್ಟ, ಉಮೇಶ್,ಅರವಿಂದ, ಸಜೇಶ್,ಸುನಿಲ್ ಕುಮಾರ್, ಸುಕೀರ್ತಿ, ಯುವಜನ‌ಸಂಘದ ಅಧ್ಯಕ್ಷ ಶರತ್,ಧನೇಶ್, ಹಾಗೂ ಗುರು ಭಕ್ತರು ಭಾಗವಹಿಸಿದ್ದರು.

Post a Comment

0 Comments