ಯುಎಇಯಲ್ಲಿ ನಮ್ಮವರು ವಿಶ್ವಕರ್ಮ ಸಮಿತಿಗೆ ಅಸ್ತಿತ್ವ


 ಯುಎಉ:  ವಿಶ್ವಕರ್ಮ ಸಮಾಜ ಬಾಂಧವರು ಗಲ್ಫ್ ರಾಷ್ಟ್ರದಲ್ಲಿಯೂ ಸಂಘಟಿತಾತ್ಮಕವಾಗಿ ಒಗ್ಗೂಡುವ ಮೂಲಕ 'ನಮ್ಮವರು ವಿಶ್ವಕರ್ಮ UAE ಸಮಿತಿಯ' ಅಧಿಕೃತ ಉದ್ಘಾಟನ ಮತ್ತು ಲಾಂಛನ ಬಿಡುಗಡೆ ಕಾರ್ಯಕ್ರಮವು ಓಣಂ ಹಬ್ಬದ ಆಚರಣೆಯೊಂದಿಗೆ ನಡೆಯಿತು.

ಈ ಸಂದರ್ಭ ನೂತನ ಸಮಿತಿ ಪದಾಧಿಕಾರಿಗಳನ್ನುಆಯ್ಕೆ ಮಾಡಲಾಯಿತು.

ಅಧ್ಯಕ್ಷರು: ಮಿಥುನ್ ಆಚಾರ್ಯ ಕುಂಬಳೆ 

ಗೌರವ ಅಧ್ಯಕ್ಷರು : ವರುಣ್ ಆಚಾರ್ಯ ಬಜಕೂಡ್ಲು 

ಉಪಾಧ್ಯಕ್ಷರು: ಪ್ರಸಾದ್ ಆಚಾರ್ಯ ಮೂವಜೆ.

ಕಾರ್ಯದರ್ಶಿ: ಮಹೇಶ ಆಚಾರ್ಯ ಕಲ್ಪಾರೆ.

ಖಜಾಂಚಿ: ಜ್ಞಾನೇಶ್ ಆಚಾರ್ಯ ಮಾಯಿಪ್ಪಾಡಿ 

ಜೊತೆಗೆ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲಾಯಿತು.


ಈ ಸಂದರ್ಭದಲ್ಲಿ ಹಿರಿಯರಾದ ಶ್ರೀ ಗಣೇಶ್ ಆಚಾರ್ಯ ಶೇಣಿಯವರಿಗೆ ಸನ್ಮಾನವನ್ನು ಮಾಡಲಾಯಿತು ಹಾಗೂ ಓಣಂ ಆಚರಣೆಯು ವಿವಿಧ ವಿನೋದ ಕಾರ್ಯಕ್ರಮಗಳೊಂದಿಗೆ ಜರಗಿತು.

Post a Comment

0 Comments