ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿನ ಕುಟುಂಬಶ್ರೀ ನೇತೃತ್ವದಲ್ಲಿ ನಡೆದ 14ನೇ ವಾರ್ಡಿನ ಶೇಣಿಯಲ್ಲಿ ಬಾಲ ಸಭಾ ಬಾಲ ಸದಸ್ಸ್ ಕಾರ್ಯಕ್ರಮವು ಶ್ರೀಶಾರದಾಂಬ ಶಾಲೆಯಲ್ಲಿ ಜರಗಿತು.
ಪಂ.ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಕಾರ್ಯಕ್ರಮ ಉದ್ಘಾಟಿಸಿದರು. ಬಾಲಸಭಾ ವಾರ್ಡ್ ಸಮಿತಿ ಅಧ್ಯಕ್ಷೆ ಅಫ್ರಾ ಅಧ್ಯಕ್ಷತೆವಹಿಸಿದ್ದರು.
ಮಾಜಿ ಗ್ರಾ.ಪಂ.ಅಧ್ಯಕ್ಷೆ ಶಾರದ ವೈ,ಸಿಡಿಎಸ್ ಸದಸ್ಯೆ ಪುಷ್ಪಾ, ಆಶಾ ವರ್ಕರ್ ಸುನೀತಾ,ಕುಟುಂಬಶ್ರೀ ಮೆಂಟರ್ ಫಸರುನ್ನೀಸ ಶುಭಾಶಂಸನೆಗೈದರು. ಅನ್ವಿತಾ ಶೇಣಿ ಮತ್ತು ಬಳಗದವರು ಪ್ರಾರ್ಥನೆಗೈದರು. ಶಹನಾ ಸ್ವಾಗತಿಸಿ ಚಾರುಜಶ್ರೀ ಮಣಿಯಂಪಾರೆ ವಂದಿಸಿದರು. ಅನನ್ಯ ಶೇಣಿ ನಿರೂಪಿಸಿದರು.




0 Comments