ಪೆರ್ಲ : ರವಿವಾರ (ನಿನ್ನೆ) ಸಂಜೆ ಬಿರುಸಿನ ಮಳೆ ಸುರಿದ್ದಿದ್ದು ಈ ವೇಳೆ ಸಿಡಿದ ಗುಡುಗು ಮಿಂಚಿಗೆ ಪುತ್ತಿಗೆ ಪಂಚಾಯತಿನ ದೇರಡ್ಕ ಸಮೀಪ ನೆಕ್ಕರೆಪದವಿನ ಮನೆಯೊಂದಕ್ಕೆ ಸಿಡಿಲು ಬಡಿದ ಘಟನೆ ನಡೆದಿದೆ. ಇಲ್ಲಿನ ರಿಕ್ಷಾ ಚಾಲಕರಾಗಿರುವ ವಿಜಯ ಕುಮಾರ್ ಎಂಬವರ ಮನೆಯ ಕರೆಂಟ್ ಮೈನ್ ಸ್ವಿಚ್,ಮೀಟರ್ ಹಾಗೂ ವಯರಿಂಗ್ ಗಳು ಹಾನಿಗೊಂಡಿದೆ. ಮನೆಯ ಗೃಹೋಪಯೋಗಿ ವಸ್ತುಗಳು ಹಾನಿಗೊಂಡಿರುವುದರಿಂದ ಸಾವಿರಾರು ರೂಗಳ ನಾಶ ನಷ್ಟ ಸಂಭವಿಸಿದೆ.
0 Comments